Wednesday, February 16, 2011

ಗಟ್ಕಾ ಮತ್ತು ಮಲೆನಾಡು


ಗುಟ್ಕಾ ನಿಷೇಧ ಮಾಡಿರುವುದು ನಿಮಗೆ ತಿಳಿದಿರಬಹುದು. ಆದ್ರೆ ಇದರಿ೦ದಾಗಿ ಮಲೆನಾಡಿನ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ.
ಸ್ವಲ್ಪ ಮಲೆನಾಡಿನ ವಿಷಯಕ್ಕೆ ಬರೋಣ. ಇಲ್ಲಿನ ಬಹುತೇಕ ಮ೦ದಿ ದೊಡ್ಡ ಹಿಡುವಳಿ ದಾರರಲ್ಲ. ಸಣ್ಣ ರೈತರು ಅ೦ತಾರಲ್ಲ ಆ ಗು೦ಪು. ಗ೦ಜಿ ಕುಡಿದರೂ ಗತ್ತಿನ೦ದ ಕುಡಿ ಅನ್ನುವ ಸ್ವಾವಲ೦ಬಿ ಹಾಗೂ ಸ್ವಾಭಿಮಾನಿ ಜನ. ಇಲ್ಲಿ ಮಳೆ ಬಹಳ ಜಾಸ್ತಿ. ವರ್ಷದ ಹತ್ತು ತಿ೦ಗಳು ಬರೀ ಮಳೆಯೇ. ಹಿ೦ದೆ ಇಲ್ಲಿ ಭತ್ತದ ಕೃಷಿ ಇತ್ತು, ಭೂಸುದಾರಣೆಯೆ ಮು೦ಚಿನ ಮಾತದು. ಆದ್ರೆ ಇಲ್ಲಿನ ಜಡಿಮಳೆಗೆ ಬಿತ್ತಿದ ಬೆಳೆ ಕೈಗೆ ಬರುವುದು ಬಹಳ ಕಷ್ಟ. ಇದನ್ನ ನಾವು ಬಹಳ ಭಾರಿ ಗಮನಿಸಿದ್ದೇವೆ. ಪ್ರತಿ ವರ್ಷವೂ ಬೆಳೆದ ಭತ್ತ ನೆರೆಯಲ್ಲಿ ಕೊಚ್ಚಿ ಹೋಗುವುದನ್ನ ಕಣ್ಣಾರೆ ಕ೦ಡಿದ್ದೇವೆ. ಇನ್ನು ಕೊಡಗಿನ ರೀತಿ ಕಾಫಿ ಬೆಳೆಯಲು ಮೊದಲೇ ಹೇಳಿದ ಹಾಗೆ ಇಲ್ಲಿರುವ ಮ೦ದಿ ಸಣ್ಣ ಹಿಡುವಳಿ ದಾರರು. ಕಳೆದಲವು ದಶಕಗಳಿ೦ದ ಮಲೆನಾಡ ಮ೦ದಿ ನೆಚ್ಚಿಕೊ೦ಡಿರುವುದು ಅಡಕೆ ಬೆಳೆಯನ್ನೆ.
ಮಲೆನಾಡ ರೈತರ ಬಗ್ಗೆ ಇನ್ನೊ೦ದು ಮಾತು ಹೇಳಬೇಕು ಇಲ್ಲಿನ ಜನ ನೆಲವನ್ನ, ಜಮೀನು ಅ೦ದರೆ ಇನ್ನೂ ಸೂಕ್ತ, ಪ್ರಾಣಕ್ಕಿ೦ತ ಹೆಚ್ಚಾಗಿ ಪ್ರೀತಿಸ್ತಾರೆ. ಹಳ್ಳಿಯಿ೦ದ ಪಟ್ಟಣಕ್ಕೆ ವಲಸೆ ಹೋಗುವ ಸ೦ಸ್ಕೃತಿ ಇಲ್ಲಿ ಇಲ್ಲನೇ ಅ೦ತ ಹೇಳಬಹುದು. ಇಲ್ಲಿನ ರೈತರಲ್ಲಿ ಬಹುಪಾಲಿ ಮ೦ದಿ ಪದವೀ ದರರೇ, ಅದರಲ್ಲೂ ಈ ತಲೆಮಾರಿನವರಲ್ಲಿ ಬಹುಪಾಲು ಮ೦ದಿ ಇ೦ಜಿನಿಯರೋ, ಲಾಯರೋ, ವೈದ್ಯರೋ ಇದ್ದಾರೆ. ಎಲ್ಲರಿಗೂ ಇಲ್ಲಿನ ಸೆಳೆತ ಹೋಗಿಲ್ಲ. ಒ೦ತರ ನೆಲ ಸುಟ್ಟ ಅನ್ನ ತಿ೦ದ ನಾಯಿ ತರಹ.
ಹಾಗೆ ಇಲ್ಲಿ ಕಾಳು ಮೆಣಸು, ಏಲಕ್ಕಿ, ಬಾಳೆ ಮೊದಲಾದ ಬೆಳೆಗಳೂ ಇವೆ. ಆದ್ರೆ ಅವು ಶಾಶ್ವತ ಅನ್ನ ನೀಡುವ೦ತಹದ್ದಲ್ಲ.
ಇಲ್ಲಿ ತಿಳಿದು ಬರುವ ವಿಷಯ ಏನು ಅ೦ದ್ರೆ ಅಡಕೆ ಮಲೆನಾಡಿನ ಜೀವ ನಾಡಿ. ಅದಿಲ್ಲದಿದ್ದರೆ ಇಲ್ಲಿ ಸತ್ವ ಇಲ್ಲ, ಜೀವ ಇಲ್ಲ. ಕಳೆದೈದಾರು ವಾರಗಳಿ೦ದ ಮ೦ಡಿಗಳಲ್ಲಿ ಅಡಕೆ ಕೊಳ್ಳಲು ವರ್ತಕರು ಬರ್ತಾ ಇಲ್ಲ. ಬೆಳೆಗಾರ ಅಕ್ಷರಶಃ ಕ೦ಗಾಲಾಗಿದ್ದಾನೆ. ಹೌದು ಇಲ್ಲಿನ ಬಹುತೇಕ ರೈತರ ಮಕ್ಕಳೆಲ್ಲ ಯಾವ್ಯಾವುದೋ ಕಡೆ ಉತ್ತಮ ಕೆಲಸದಲ್ಲಿ ದುಡಿಯುತ್ತಿರಬಹುದು. ಆದ್ರೆ ಇದೇ ಸ್ಥಿತಿ ಮು೦ದುವರೆದರೆ ಅವರು ವಾಪಸ್ ತಾಯ್ ನೆಲಕ್ಕೆ ಬರದಿರಬಹುದು. ಇಅದರಿ೦ದ ಮಲೆನಾಡು ಸಾಯುತ್ತದೆ. ಒ೦ದು ಸ೦ಸ್ಕೃತಿಯೇ ಅಳಿಯುತ್ತದೆ.
ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಸರಿ. ಆದ್ರೆ ಇಲ್ಲಿನ ಬೆಳೆಗಾರನಿಗೆ ಒ೦ದು ದಾರಿ ತೋರಿಸುವುದು ಸರ್ಕಾರದ ಕರ್ತವ್ಯ.
ಪಟ್ಟಣಗಳಿಗೇ ಗುಳೇ ಹೋಗುವ೦ತಹ ದುಃಸ್ಥಿಥಿ ನಮ್ಮ ಮಲೆನಾಡಿಗೆ ಬರಬಾರದು ಅನ್ನುವುದು ನಮ್ಮ ಅಭಿಲಾಷೆ.

1 comment:

  1. nimma maatu nija

    kelavomme gutka kettaddu anta heli adike nishedha maadidre lakshantara kutumbagalu rastege baruttave

    olleya baraha

    ReplyDelete